Saturday, January 14, 2012

ಮಹಾ ಪ್ರಭಂಧದ ಮುಕ್ತಾಯ...

ಪ್ರಿಯ ಬ್ಲಾಗಿನ ಮಿತ್ರರೇ,

ಇದು ನನ್ನ ಪ್ರೀತಿಯ ಮಹಾ ಪ್ರಭಂಧದ (ಪಿ.ಎಚ್.ಡಿ) ಕತೆ. ನನ್ನ ಸಂಶೋಧನಾ ವಸ್ತು "ಅನಾರೋಗ್ಯಕರ ಕಟ್ಟಡಗಳು ಮತ್ತು ಕಟ್ಟಡ ಸಂಭಂದಿ ಅನಾರೋಗ್ಯ ಗುಣ ಲಕ್ಷಣಗಳು". ನನ್ನ ಕತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅರಬ್ ರಾಷ್ಟ್ರಗಳೇ ಪ್ರೇರಣೆ ಮತ್ತು ಕಾರಣ.

ನಾನು ಮಾನಸಿಕವಾಗಿ "...." ಅಂದುಕೊಂದ್ರಾ ಸ್ವಲ್ಪ ತಾಳಿ ... ಮೂರು ದಶಕಗಳ ಹಿಂದಿನ ಕತೆ, ಅರಬ್ ಸಮುದಾಯ ಪ್ರಪಂಚದ ಮೇಲೆ ಹಿಡಿತ ಸಾದಿಸ ಹೊರಟ ಸಮಯ...ತನ್ನಲ್ಲಿ ತೈಲ ನಿಕ್ಷೇಪ ಮುಗಿದಿದೆ ಇನ್ನು ಜಗತ್ತಿಗೆ ನಮ್ಮಿಂದ ತೈಲ ಪೂರೈಕೆ ಅಸಾಧ್ಯ ಎಂದು ಘೋಷಿಸಿಕೊಂಡಿತು, ಆಗ ಕೊರೆಯುವ ಚಳಿಗಾಲ ಬೇರೆ, ಉಷ್ಣತಾ ಸಮತೋಲನ ಅನಿವಾರ್ಯ.ಇದಕ್ಕೆ ಪ್ರತ್ಯುತ್ತರವಾಗಿ ಪಾಶ್ಚಿಮಾತ್ಯ ದೇಶಗಳು ತಮ್ಮ ಕಟ್ಟಡ ವಿನ್ಯಾಸ, ವಾತಾಯನ ವ್ಯವಸ್ಥೆ ಬದಲಿಸಿತು. ಇದರ ತರುವಾಯು ಕೇಂದ್ರಿಕೃತ ವಾತಾಯನ, ತಾಪನ ಸಾಮಾನ್ಯವಾಯಿತು. ಮನುಷ್ಯ ಸಹಜ ಆಲಸ್ಯ, ಯಂತ್ರ ಸಂರಕ್ಷಣ ಸಿಬ್ಬಂಧಿಯ ಅಸಮರ್ಪಕತೆ ಕೂಡ ಹೊಸ ರೋಗಗಳಿಗೆ ಕಾರಣ ಕೂಡ ಆಯಿತು.... ಸಮಸ್ಯೆಗಳ ಸಾಕ್ಷಾತ್ಕರಣ...ನೋಡಿ ಇಲ್ಲಿಂದ ನನ್ನ ಗೆರೆ ತಿರುಗಿತು.

ಸೂಕ್ಷ್ಮ ಜೀವಿಗಳು ಹೆಚ್ಚು ಕಮ್ಮಿ ಚೀನಿಯರು ಮತ್ತು ಭಾರತೀಯರಂತೆ ಎಲ್ಲೆಂದರಲಿ ಹೊಂದಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುತ್ತವೆ. ಇವು ಹೊಸ ಪರಿಸರ ಕೇಂದ್ರಿಕೃತ ವಾತಾಯನ ಮತ್ತು ತಾಪನ ವ್ಯವಸ್ಥೆಯನ್ನು ಹೊರತು ಪಡಿಸಲಿಲ್ಲ. ಸೂಕ್ಷ್ಮ ಜೀವಿಗಳ ಮೆಟಾಬಲಿಸಮ್ ಕ್ರಿಯೆಯ ಉತ್ಪನ್ನ (ಬಿಯೋಆಕ್ಟಿವ್) ಕಟ್ಟಡಗಳಲ್ಲಿ ಪಸರಿಸಿ "ಅನಾರೋಗ್ಯಕರ ಕಟ್ಟಡಗಳು ಮತ್ತು ಕಟ್ಟಡ ಸಂಭಂದಿ ಅನಾರೋಗ್ಯ ಗುಣ ಲಕ್ಷಣಗಳು" ಎಂಬ ಹೊಸ ಪರಿಣಾಮಕ್ಕೆ ಕಾರಣವಾಯಿತು.

ಅಂತು ಇಂತು ನನ್ನ ಸಂಶೋಧನಾ ಕಾರ್ಯ ಮುಗಿದು (ಪಿ.ಎಚ್.ಡಿ) , ಮಹಾ ಪ್ರಭಂಧದ ಅಚ್ಚು ಹಾಕಿಸಿಕೊಂಡು ಹೊದಿಕೆ ಹೊದೆಯಲು ಹೋಗಿದೆ. ಇನ್ನು ಒಂದು ತಿಂಗಳಲ್ಲಿ ನನ್ನ ಕಥೆ ಮೌಕಿಕವಾಗಿ ಹೇಳಿದರೆ ಮುಗಿಯಿತು..ಮುಂದೆ ???? ಈ ಪ್ರಶ್ನೆ ಜನ ಕೇಳೀ ಕೇಳೀ ಸಾಕುಮಾಡಿದ್ದೂ ಆಯ್ತು....

ಮುಂದೇನು ಮತ್ತೇನು ಇಂದಿಗಾ ಮಾತೇಕೆ ???
ಏನೇ ಇರಲಿ ಪಿ.ಎಚ್.ಡಿ ಕಲಿಸಿದ ಒಂದು ದೊಡ್ಡ ಪಾಠ "ತಾಳ್ಮೆ" ಮತ್ತು "ದೃಢ ಹಾಗೂ ಅವಿರತ ಯತ್ನ". ಶುಭ ರಾತ್ರಿ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭ ಹಾರೈಕೆಗಳು.

Monday, March 2, 2009

ಪ್ರೀತಿ ಹುಟ್ತೋದ್ಯಾವಾಗ ......

ಇತ್ತೇಚೆಗೆ ಕೆಲಸದ ಕಾರಣ ಇತರರ ಬ್ಲಾಗ್ಗಳೇ ಗೆಳೆಯರು. ಬಹಳ ದಿನಗಳ ನಂತರ ಮತ್ತೆ ಬರೆಯೋಕ್ಕೆ ಪ್ರಯತ್ನ. ಶಿರೋನಾಮೆಬರೆದು ಕನಿಷ್ಠ ಎರಡು ವರ್ಷ ಆಗಿರಬೇಕು ಆದ್ರೂ ಇದು ಇವತ್ತು ಅದೇ ಹುರುಪು ಅದೇ ಕನ್ಫ್ಯೂಷನ್. ಪ್ರೀತಿ ವಸ್ತುವಿನ ಬಗ್ಗೆ ಅಥವಾಸ್ಥಳ, ಪ್ರಾಣಿ ಒಬ್ಬೊಬ್ಬರಿಗೆ ಒಂದೊಂದು. ಎಲ್ಲರಿಗೂ ಎಲ್ಲಾದ್ರಬಗ್ಗೆ ಯಾಕೆ ಪ್ರೀತಿ ಹುಟ್ತೊದಿಲ್ಲ?? ಒಬ್ಬ ಒಂಟಿಯಾಗಿ ಕ್ಯಾಮರನೇತುಹಾಕಿಕೊಂಡು ಕಾಡು ಅಲೆದು ಫೋಟೋ ಕ್ಲಿಕ್ಕಿಸಿ ಕ್ಯಾಮರ ಪ್ರೀತಿಯನ್ನಿಸಿದ್ರೆ ಆತನ ತಮ್ಮ ೧೦ ಜನ ಸೇರಿಸ್ಕೊಂಡು ಪಾರ್ಟೀಮಾಡಿ ಇದೆ ಲೈಫ್ ಅಂತಾನೆ... ಒಂದೇ ತಾಯಿಯ ಮಕ್ಕಳಲ್ಲಿ ಇಷ್ಟು ವ್ಯತ್ಯಾಸ . ಹಾಗಿದ್ರೆ ಪ್ರೀತಿ ಹುಟ್ಟು ಕೂಡ ಇಷ್ಟೇ ಗುಟ್ಟುಇರ್ಬೇಕು. ನನ್ನ ಅನಿಸಿಕೆ ಪ್ರಕಾರ ಎಲ್ಲರೂ ಅವರವರಂತೆ ಜೀವನ ಸಾರ್ಥಕತೆ ಹುಡುಕುತ್ತಾರೆ ಎಲ್ಲಿ ಜಾಸ್ತಿ ಗೆಲುವೆ ಸಿಗುತ್ತೂ ಅದುಅವರ ಪ್ರೀತಿ ಆಗುತ್ತೆ ಅನ್ಸುತ್ತೆ. ಒಟ್ಟಿನಲ್ಲಿ ಪ್ರೀತಿಯ ಹುಟ್ತಿನ ಗುಟ್ಟು ರಟ್ಟು ಮಾಡೋದು ಇಷ್ಟು ಕಷ್ಟ ಆದ್ರೆ, ಪಟ್ಟು ಕಷ್ಟ ಅದನ್ನ ಬಿಟ್ಟುಇರೋದು.

Sunday, October 26, 2008

ಬೆಂಗಳೂರಿನ ಗಣಕ ಪಂಡಿತರು...

ನಮ್ಮ ಗಣಕ ಪರಿಣತ ಹುಡುಗರನ್ನ ನೋಡಿದರೆ ಸಂಶಯ, ರೋಬೋ ಅಥವಾ ಮಾನವ. ಇನ್ನೂ ೨೩-೨೪ ವರ್ಷಕ್ಕೆ / ಅಂಕೆಯ ಸಂಬಳ ಹೆಗಲಿಗೆ ಒಂದು ಲ್ಯಾಪ್ಟಾಪ್ ಎದೆಮೇಲೆ ಕಂಪನಿಯ ಲಾಂಛನ, ಹುಟ್ಟಿದ್ದೇ ಕಂಪನಿಗಾಗಿ ಅನ್ನೋ ಹಮ್ಮು, ಹೆಚ್ಚು ಕಮ್ಮಿ ಅರ್ಥ ಆಗೋ ಥರದ ಇಂಗ್ಲಿಷ್ ....ಸ್ವಲ್ಪ ತಡ್ಕೊಲಿ ಇದೆಲ್ಲ ಮೊದಲ ತಿಂಗಳಿನ ಕತೆ ಆದ್ರೆ... - ವರುಷ ಆದವರ ಕತೆ, ನಡಿಬೇಕು ಅಂದ್ರೆ ಕಿವಿ ಮೇಲೆ ಕೈ, ಕೈ ಕೆಳಗೆ ಒಂದು ಮೊಬೈಲ್ ಇರಲೇಬೇಕು...ಇದು ನಮ್ಮ ಬೆಂಗಳೂರು ಹುಡುಗರು...ಇವರಲ್ಲಿ ಸೇರಿದಾಗ ಮುಗ್ಧತೆ, ಮಹತ್ವಾಕಾಂಕ್ಷೆ ಇದ್ದದ್ದು ನಿಜ ಆದ್ರೆ ೨-೩ ವರುಷ ಅದರ ಕತೆ ಬೇರೇನೆ...ಇಲ್ಲ ಮಗ ಮ್ಯಾನೇಜರ್, ಅಪ್ಪ್ರಿಸಲ್ ಟೈಮ್, ಟ್ರೇನಿಂಗ,ಆನ್ ಸೈಟ್ ಗೊಣಗಾಟ ಅಂತ ವೋಕಾಬ್ ಫುಲ್ ಚೇಂಜ್...ಆಫೀಸ್ ದುಡಿಯುವ ಟೈಮ್ (ಬಂದಾಗಿಂದ-ಹೋಗೋವರೆಗೆ) , ವೀಕೆಂಡ್ ಆದ್ರೆ ಅಳುವ ಮಗು ತೊಡೆ ಬಿಡದ ಹಾಗೆ ಲ್ಯಾಪ್ಟಾಪ್...ಸಾಲದು ಅಂತ ವರ್ಕ್ ಫ್ರಾಮ್ ಹೋಂ ...ದೇವರೇ ನೀನು ವಿಶ್ವವ್ಯಾಪಿ, ನಿರಾಕರ ಸ್ವರೂಪಿ ನಿಜ, ಈ ಹುಡುಗರ ಪಾಲಿಗಂತೂ ಆಕಾರ ಸಾಕಾರ ಎಲ್ಲ ಬಿಲ್, ಸ್ಟೀವ್, ಪ್ರೇಂ, ಮೂರ್ತಿ, ರಾಜು , ಮಹಿಂದ್ರ ...ಜೈ ಹೋ

Sunday, October 19, 2008

ಕಲ್ಪನಾ ಸುಂದರಿಯೆದುರಾದಾಗ .....

ನನ್ನ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಕಲ್ಪನೆ ಅದರ ಪ್ರತಿರೂಪದ ಹುಡುಕು ಇದ್ದೆ ಇರುತ್ತೆ. ಇಲ್ಲಿ ಒಂದು ಪ್ರಯತ್ನ ನನ್ನ ಕಲ್ಪನಾ ಸುಂದರಿಯ ಎದುರಾದಾಗ ನನ್ನ ಪರಿಸ್ಥಿತಿ, ನೋಟ, ಮಾತು ಮನಸ್ಸುಗಳ ಒಂದು ಪಕ್ಷಿನೋಟ. ನನ್ನ ಪ್ರಕಾರ ನನ್ನ ಸುಂದರಿಗೆ ಮನಸ್ಸಿನ ಸೌಂದರ್ಯ, ವಿಶಾಲ ಮೈದಾನದಂತ ಮನಸ್ಸು ಪ್ರಮುಕವಾದ ಗುಣ. ಮಾತು ಮೆಲು, ಮಧುರ, ಸರಳ ಮತ್ತು ನೇರ. ಮೊದಲ ನೋಟದಲ್ಲಿ ಅವಳ ಗುಂಗುರು ಮುಂಗುರುಳು ನನ್ನನ್ನು ಆತುರದಲ್ಲಿ ಬಾ ಅಂದ್ರೆ ಬೊಗಸೆ ಕಂಗಳ ಗಂಭೀರ ನೋಟ ಧೀಮಂತ ನಿಲುವು ಸ್ವಲ್ಪ ತಾಳು ಅನ್ನತ್ತೆ. ಹಾಗು ಹೀಗೂ ಮಾತಾಡಲು ಹೋದರೆ ಮೆದುಳು ನಾಲಿಗೆ ಲಗಾಮು ಎಳೆದು ಎಚ್ಚರಿಸುತ್ತೆ ಹುಷಾರು!!! ಎಲ್ಲ ಒದರಬೇಡ, ಮತ್ತೆ ಕ್ಷಮಿಸಿ ಅನ್ನಲೋ ವಂದನೆ ಅನ್ನಲೋ ಎಂಬ ಗಲಿಬಿಲಿ ಜೊತೆಗೆ ಏನೂ ಅನ್ನದಿದ್ದರೆ ಮುಂದೆ ಅನ್ನಲಾರದೆ ಹೋದೆನಲ್ಲ ಎಂಬ ಹತಾಶೆಯ ಭಯ ...... ಇಷ್ಟು ಸಾಲದೆಂಬಂತೆ ಹಿರಿಯರಾರೋ ಹೇಳಿದ ಮಾತು ಆತುರಗಾರನಿಗೆ ಬುದ್ದಿ ಮಟ್ಟ ಬೇರೆ ಕಿವೀಲಿ ಗುನುಗುತ್ತ ಇದೆ..ತಾಲೀಮೆಲ್ಲ ಕೈ ಕೊಟ್ಟಿದೆ ಎಲ್ಲ ತಾಕತ್ತು ಸೇರಿಸಿ ಮಾತು ಶುರು ಮಾಡೋಣ ಅಂದ್ರೆ ಗಂಟಲು ಒಣಗುತ್ತೆ ಆದರು ಹೃದಯ ನಡೆ ಮುಂದೆ ನಡೆ ಮುಂದೆ ಅನ್ನೋ ಹುಮ್ಮಸ್ಸು ತುಂಬುತ್ತೆ, ಮಿದುಳು ಏನಾದ್ರೂ ಆಗ್ಲಿ ಸಿಹಿ ಅಥವಾ ಹುಳಿ ಅನುಭವದ ಒಂದು ಶಾಶ್ವತ ಸ್ಮರಣೆಯ ಶೇಕರನೆಗೆ ಒಂದು ವಿಶೇಷ ಸಿಹಿ ಜಾಗ ಗೊತ್ತು ಮಾಡಿದಿನಿ ತುಂಬು ಅನ್ನತ್ತೆ......ಏನೀ ಪರಿಸ್ಥಿತಿ

ಸರಿ ಶ್ರೀಮದ್ ಗಂಭೀರ್ಯದೊಂದಿಗೆ ಶುರು ಮಾಡಿದ್ರೆ ಪ್ರತ್ಯುತ್ತರ ಸರಳ ಮತ್ತು ಚುಟುಕು ಆದರೆ ಅರ್ಥಗರ್ಭಿತ ಮತ್ತು ಅವಿಸ್ಮರಣೀಯ....ಇದೆಲ್ಲ ಗುಣ ನನ್ನಲ್ಲೇ ಇದ್ದಿದ್ರೆ ಕಂಡಿತಾ ಈ ಕಲ್ಪನೆ ಬ್ಲಾಗು ಎರಡು ಇರ್ತಿರಲಿಲ್ಲವೇನೋ ಇದೇ ಕಾರಣ ಅನ್ಸುತ್ತೆ ಪ್ರತೀ ಯಶಸ್ವೀ ಪುರುಷನ ಹಿಂದೆ ಒಬ್ಬ ಸುಂದರಿಯ ಪ್ರೋತ್ಸಾಹ, ಪ್ರಚೂದನೆ, ಇರುವಿಕೆಗಳ ರಹಸ್ಯ. ಹೋಗಲಿ ಬಿಡಿ...ಆದರು ಬಿಡಕ್ಕೆ ಮನಸ್ಸಿಲ್ಲ ಕಣ್ಣು ಮುಚ್ಚಿದರೆ ಎದುರು ನಿಲ್ಲುವ ಆಕೆಯ ನಿಲುವು ...ಕಣ್ಣು ತೆರೆದು ಪೂರ್ತಿ ಬರಿಲಿಕ್ಕೆ ಸ್ಫೂರ್ತಿ....ನಿಜವಾಗ್ಲು ನನ್ನಂತ ಹಡ ಸೋಂಬೇರಿನಾ ಎರಡನೆ ಬ್ಲಾಗ್ ಬರೆಯೋ ಹಾಗೆ ಮಾಡಿದ ಮಹಾ ತಾಯಿ..ನಿಂಗೆ ಒಂದು ದೊಡ್ಡ ಸಲ್ಯೂಟ್ ...ಶುಭ ರಾತ್ರಿ
ವಿ.ಸೂ-ಇದು ಕಲ್ಪನೆ ಬರಹ ರೂಪದಲ್ಲಿ ಅಸ್ಹ್ತೆ...

Thursday, September 25, 2008

ಆಸಕ್ತಿ , ಅನಿವಾರ್ಯ ಮತ್ತು ಅನಾವಶ್ಯಕ ಅಹಂ..

ನಮ್ಮ ವ್ಯಕ್ತಿತ್ವಾನ ತಿದ್ದಿ ತೀಡಿ ಇರಲು ಆಗದೆ ಇರೋ ಜನ ನಾವು ....ಕೆಲ ವರ್ಷದ ಹಿಂದಿನ ಗೆಳೆಯನ್ನ ಹುಡುಕೊಂಡು ಹೋದ ನನಗೆ ಅನ್ಸಿದ್ದು ಹೀಗೆ..ಪಿ.ಯು.ಸಿ ಮುಗಿದ ಮೇಲೆ ಆತನ್ನ ನೋಡೆ ಇರ್ಲಿಲ್ಲ ಆಕಸ್ಮಿಕ ಒರ್ಕುತಲ್ಲಿ ನೋಡಿಕೇಳಿ ಫೋನ್ ನಂಬರ್ ತಗೊಂಡು ಕಾಲ್ ಮಾಡಿ ಊರಿಗೆ ಹೋದಾಗ ಹುಡುಕೊಂಡು ಹೋದೆ ಊಹೆಯಂತೆ ಮೈಕಟ್ಟು , ಉಡುಗೆ ಬದಲಾವಣೆ, ಅದೆಲ್ಲ ಬಿಡಿ ಮಾತಿನ ವೈಕರಿ ಏನು ಹುಡುಕೊಂಡು ಬಂದೆ ಅನ್ನೋ ಗತ್ತು, ನನ್ನಿಂದ ಏನಾಗಬೇಕೋ ಅನ್ನೂ ಹಮ್ಮು ..... ಸ್ವಲ್ಪ ಹಾಗೂ ಹೀಗೂ ಸಮಯ ತಳ್ಳಿದ ಮೇಲೆ ನಿದಾನವಾಗಿ ಬಾಯ್ಬಿಟ್ಟ ಪುಣ್ಯಾತ್ಮ ಯಾಕೋ ಲೈಫಲ್ಲಿ ಏನು ಅರ್ಥ ಇಲ್ಲ ಅಂತ, ಏನು ಮಾಡಿದ್ರೂ ಕುಶಿ ಸಿಗ್ತಿಲ್ಲವಂತೆ...ಇಷ್ಟೆಲ್ಲಾ ಹೊಸ ಗುಣಗಳು ಬೆಳಸಿ ಕೊಂಡಿರುವ ಜೊತೆಗೆ ಜೀವನಕ್ಕೆ ಅರ್ಥ ಬೇರೆ ಹುಡುಕ್ತ ಇದಾನೆ ಪುಣ್ಯಾತ್ಮ.

Tuesday, June 19, 2007

Namesake

ಬದಲಾವಣೆ ಅನಿವಾರ್ಯ ಆದಾಗ ತಲೆ ಬರಹ ಚೇಂಜ್ ಮಾಡಿ ಏನೋ ಒಂದು ಬದಲಾವಣೆ ಬಂತು ಅನ್ಕೊಂಡೆ ಮೋಸ್ಟ್ಲಿ ಇದೆನಮ್ಮ ಇಂದಿನ ವರ್ಚುಯಲ್ ಸಂತೃಪ್ತ ಲೈಫ್ನ ರಿಯಾಲಿಟಿ ಅನ್ಸುತ್ತೆ...ಇವತ್ತು ಶನಿವಾರ ವಿಪರೀತ ಬೋರ್ ಆಗ್ತ ಇತ್ತು ಸರಿ ಒಬ್ಬ ದೋಸ್ತ್ಗೆಫೋನ್ ಹಾಕಿದೆ ನಿಜ ಹೇಳ್ಬೇಕು ಅಂದ್ರೆ ಮಾತಾಡೋಕ್ಕೆ ಏನು ಇಲ್ಲ ಪ್ರಯತ್ನ ಪೂರ್ವಕವಾಗಿ ವಿಷಯ ಸ್ತ್ರುಷ್ಟಿ.ಮಾತಾಡೋವಾಗ ಬರಿ ಕೆಲಸದ ಮಾತೆ ನಡೀತಾ ಇತ್ತು ಕೇಳೋ ತನಕ ಕೇಳಿ ಕೊನೆಗೆ ಹಗುರ ಮಾತಿನಲ್ಲಿ ಕೆಲಸ ಇಲ್ಲದವರು ಕೆಲಸ ಮಾಡ್ಲಿ ನಿನ್ನ ಬಾಸ್ಗು ಸ್ವಲ್ಪ ಕೆಲಸ ಕೊಡು ಅಂತ ಹೇಳಿದೆ ಅದಕ್ಕೆ ಆತ ಅಫೆಂಡ್ ಆಗಿರಬೇಕೋ ...ಯಾಕೆ ಅಂತ ಗೊತ್ತಾಗಲಿಲ್ಲ...ಉತ್ತರ ಬಂದ ಪರಿ...ನನ್ನದು ಏನು ಕಮ್ಮಿ ಇಲ್ಲ...ಇದನ್ನುಜೀರ್ಣ ಮಾಡ್ಕೊಳ್ಳೋಕೆ ಸ್ವಲ್ಪ ಟೈಮ್ ಹಿಡಿತು ಅನ್ನೋಣ...ನಿಜ ಒಪ್ಪಿಕೊಳ್ಳಲೇ ಬೇಕಾದ ಮಾತು 'ಉಧ್ಯೋಗಂ ಪುರುಷ ಲಕ್ಷಣಂ' ಸ್ವಾಮಿ ಯಾಕೆ ನಮ್ಮ ಪ್ರೈವೇಟ್ ಲೈಫ್ಗೆ ನಾವು ಪ್ರೊಫೆಷನಲ್ ಲೈಫ್ ಕಿರೀಟ ಹಾಕಿ ಏನು ಸಾದಿಸ ಪ್ರಯತ್ನಿಸ್ತ ಇದೀವಿ. ಹೋಗಲಿ ಬಿಡಿ ಹಾಗು ಹೀಗೂ ಈ ದೂರವಾಣಿ ಕರೆ ಮುಗಿಸಿ ಗೆದ್ದೇ ಅನ್ಕೊಂಡೆ...ಇಷ್ಟೆಲ್ಲದರ ಮಧ್ಯ ಮಿಸ್ಸಿಂಗ್ ಒಂದೇ ಆತ್ಮೀಯತೆ.....ಅದೇನೋ ಹೇಳ್ತಾರಲ್ಲ ಹಳ್ಳಿ ಕಡೆ ಮದುವೆ ಮಸ್ತ್ ಗಂಡು ಸ್ವಲ್ಪ ಹಾಗೆ ಅನ್ನೋ ಹಾಗೆ....ಅಥವಾ ಇನ್ನೊಂದು ವಿಮರ್ಶೆ ವೃತಿ ಜೀವನದ ಯಶಸ್ವಿ ನಾಗಾಲೋಟಕ್ಕೆ ಭಾವನೆಗಳು, ನೆನಪುಗಳು ಭಾದಕವೋ/ಅನಾವಷ್ಯಕವೋ ಏನೋ ......ಇದೆಲ್ಲದರ ಬಗ್ಗೆ ನಂಗೆ ಅಂತಾದೇನು ವಿಶೇಷ ಬೇಜಾರಿಲ್ಲ ಇಲ್ಲಿ ತನಕ ಬದುಕು ಕಲಿಸಿದ ಮೊದಲನೆ ಪಾಠ ಕೆಲಸಕ್ಕೆ ಬಂತು ಅಂದುಕೊಂಡೆ ಫಾರ್ಗಿವೆ ಅಂಡ್ ಫಾರ್ಗೆತ್ .